ದಿನಾಂಕ:25-02-2020 ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ,ಜಿಲ್ಲಾ ಸಂಸ್ಥೆ ರಾಯಚೂರು ಹಾಗೂ ಸ್ಥಳೀಯ ಸಂಸ್ಥೆ ರಾಯಚೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ, ಸಂಸ್ಥಾಪಕರ ಮತ್ತು ವಿಶ್ವ ಚಿಂತನಾ ಹಾಗೂ ವಿಶ್ವ ಭಾತೃತ್ವ ದಿನಾಚರಣೆ,2020 ಧ್ಯೇಯ ವಾಕ್ಯ:" ವಿವಿಧತೆಯಲ್ಲಿ ಏಕತೆ,ಸಮಾನತೆ ಮತ್ತು ಸೇರ್ಪಡಿಸುವಿಕೆ" ಸ್ಥಳ: ಜಿಲ್ಲಾ ಸ್ಕೌಟ್ ಭವನ ರಾಯಚೂರು ಮೊದಲಿಗೆ ಸರ್ವಧರ್ಮ ಪ್ರಾರ್ಥನೆಯನ್ನು ಬೆಳಿಗ್ಗೆ:7.30 ಗಂಟೆಗೆ ಹಮ್ಮಿಕೊಳ್ಳಲಾಯಿತು,ನಂತರ 8.00 ಗಂಟೆಗೆ ದ್ವಜಾರೋಹಣ ಮಾಡಲಾಯಿತು, 9.00 ಗಂಟೆಗೆ ಸೈಕಲ್ ಜಾಥಾವನ್ನು ಉದ್ಘಾಟನೆ ಮಾಡಲಾಯಿತು, ನಂತರ ಮಕ್ಕಳಿಗೆ ಉಪಹಾರ ಬೋಜನೆ ಮಾಡಿದ ನಂತರ 10.30 ಕ್ಕೆ ಕಬ್ ಮತ್ತು ಬುಲ್-ಬುಲ್ ಹಾಗೂ ಸ್ಕೌಟ್-ಗೈಡ್ಸ್ ಮಕ್ಕಳಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು,(200) ಕಬ್ ಮತ್ತು ಬುಲ್-ಬುಲ್ ಹಾಗೂ ಸ್ಕೌಟ್-ಗೈಡ್ಸ್ ಭಾಗವಹಿಸಿದ್ದರು,ಮಕ್ಕಳ ಜೊತೆಯಲ್ಲಿ ಕಬ್ ಮಾಸ್ಟರ್,ಸ್ಕೌಟ್ ಮಾಸ್ಟರ್,ಗೈಡ್ ಕ್ಯಾಪ್ಟನ್ ರವರು ಭಾಗವಹಿಸಿದ್ದರು ನಂತರ ಸಮರೋಪ ಸಮಾರಂಭ 1.00 ಗಂಟೆಗೆ ಕಾರ್ಯಕ್ರಮದಲ್ಲಿ ಅದ್ಯಕ್ಷತೆಯನ್ನು ಶ್ರೀಮತಿ ಅಜೀಜಾ ಸುಲ್ತಾನ್ ಪ್ರಭಾರಿ ಜಿಲ್ಲಾ ಮುಖ್ಯ ಆಯುಕ್ತರು ,ಉದ್ಘಾಟಕರಾಗಿ ಶ್ರೀಮತಿ ಪರಿಮಳ ರೆಡ್ಡಿ ರೇಸ್ ಬಚ್ ಪನ್ ಶಾಲೆಯ ಮುಖ್ಯಗುರುಗಳು ರಾಯಚೂರು ಮುಖ್ಯ ಅತಿಥಿಗಳಾಗಿ ಶ್ರೀ ಎಚ್.ಎಚ್.ಮ್ಯಾದರ್ ನಿವೃತ್ತ ಚಿತ್ರಕಲೆ ಶಿಕ್ಷಕರು ರಾಯಚೂರು,ಶ್ರೀ ಬಸವರಾಜ ಗದುಗಿನ ಜಿಲ್ಲಾ ಕಾರ್ಯದರ್ಶಿಗಳು, ಶ್ರೀಮತಿ ಆಲೀಯಾ ಖಾನುಂ ಜಿಲ್ಲಾ ಆಯುಕ್ತರು ಗೈಡ್,ಶ್ರೀ ಬಸವರಾಜ ಬೋರೆಡ್ಡಿ ಜಿಲ್ಲಾ ಆಯುಕ್ತರು ಸ್ಕೌಟ್,ಶ್ರೀ ಎಲ್.ಬಿ.ಹೊರಪ್ಯಾಟಿ ಜಿಲ್ಲಾ ಸ್ಥಾನೀಕ ಆಯುಕ್ತರು,ಶ್ರೀಮತಿ ಎಮ್.ಲಲಿತಾ ಬಸವನಗೌಡ .ಎ.ಡಿ.ಸಿ.ಗೈಡ್ ಶ್ರೀ ನಾಗೇಶ ಗೌಡ ಡಿ.ಟಿ.ಸಿ.ಸ್ಕೌಟ್,ಶ್ರೀಮತಿ ವಿಜಯಲಕ್ಷ್ಮೀ ಡಿ.ಟಿ.ಸಿ.ಗೈಡ್,ಶ್ರೀ ಆರ್.ಎಚ್ ಸಾಗರ್ ಅದ್ಯಕ್ಷರು ಸ್ಥ.ಸಂ.ರಾಯಚೂರು,ಶ್ರೀ ಎನ್ ಶೇಖರ್ ತಾಲೂಕ ಕಾರ್ಯದರ್ಶಿಗಳು ಸ್ಥ.ಸಂ ರಾಯಚೂರು,ಹಾಗೂ ಜಿಲ್ಲಾ,ಸ್ಥ.ಸಂ.ಎಲ್ಲಾ ಪದಾಧಿಕಾರಿಗಳು ಮತ್ತು ಕು.ಅಂಬಣ್ಣ ನಾಯಕ ಎಸ್.ಜಿ.ವಿ. ಹಾಗೂ ರೋವರ್ ವೆಂಕಟೇಶ ಉಪಸ್ಥಿತರಿದ್ದರು.
Comments
Post a Comment