Skip to main content

ದಿನಾಂಕ:08-02-2020ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ,ಜಿಲ್ಲಾ ಸಂಸ್ಥೆ ರಾಯಚೂರು ಮತ್ತು ಸ್ಥಳೀಯ ಸಂಸ್ಥೆ ಸಿಂಧನೂರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಿಂಧನೂರು,ದುದ್ದುಪುಡಿ ಆಂಗ್ಲಮಾಧ್ಯಮ ಪ್ರೌಢ ಶಾಲೆ,ಸಿಂಧನೂರು ಇವರುಗಳ ಸಂಯುಕ್ತಾಶ್ರಯದಲ್ಲಿ ತಾಲೂಕ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಜಾಥಾ ಕಾರ್ಯಕ್ರಮವನ್ನು ಸ್ಥಳ: ದುದ್ದುಪುಡಿ ಆಂಗ್ಲಮಾಧ್ಯಮ ಪ್ರೌಢ ಶಾಲೆ,ಯಿಂದ ಕೆ.ಪಿ.ಟಿ.ಸಿ.ಎಲ್.ಕೆ.ಬಿ ಕಛೇರಿವರಗೆ ತಾಲೂಕ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಒಂದು ಜಾಥಾ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಸ್ಕೌಟ್ ಮತ್ತು ಗೈಡ್ಸ್-(500) ಮಕ್ಕಳು ಹಾಗೂ ಸ್ಕೌಟ್ ಮಾಸ್ಟರ್,ಗೈಡ್ ಕ್ಯಾಪ್ಟನ್ ಮತ್ತು ಜಿಲ್ಲಾ ಸಂಸ್ಥೆ ರಾಯಚೂರು ಮತ್ತು ಸ್ಥಳೀಯ ಸಂಸ್ಥೆ ಸಿಂಧನೂರು ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು. ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ವಿವಿಧ ರೀತಿಯಾ ಸ್ಕೌಟ್ ಮತ್ತು ಗೈಡ್ ಗೆ ಸಂಬಂಧಿಸಿದ ಸ್ಪರ್ಧೆಗಳನ್ನು ಮಕ್ಕಳಿಗಾಗಿ ಏರ್ಪಡಿಸಲಾಗಿತ್ತು. ಈ ಒಂದು ಸ್ಪರ್ಧೆಯಲ್ಲಿ ಪ್ರತಿ ಶಾಲೆಯಿಂದ 03 ಸ್ಕೌಟ್,03 ಗೈಡ್ಸ್ ಮಕ್ಕಳು ಭಾಗವಹಿಸಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.












































Comments

Popular posts from this blog

ಇಂದು ದಿನಾಂಕ:22-02-2020ರಂದು ರೇಸ್ ಕಾನ್ಸೆಪ್ಟ್ ಶಾಲೆ ಮಲಿಯಾಬಾಧ್ ರಸ್ತೆ, ರಾಯಚೂರು ವಿದ್ಯಾಲಯ ತಾ:ಜಿ: ರಾಯಚೂರು ಸ್ಟೌಟ್ ಮತ್ತು ಗೈಡ್ ಘಟಕಗಳ ವತಿಯಿಂದ ಸಂಸ್ಥಾಕರ ಜನ್ಮದಿನಾಚರಣೆ ಹಾಗೂ ವಿಶ್ವಚಿಂತನಾ ಮತ್ತು ಭಾತೃತ್ವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶೇ ಕೊಂಡ್ ಕೃಷ‌್ಣಮೂರ್ತಿ ಶಾಲಾ ಅಧ್ಯಕ್ಷರು ರೇಸ್ ಕಾನ್ಸೆಪ್ಟ್ ಶಾಲೆ , ಶ್ರೀ ಚಂದ್ರ ಮೋಹನ್ ರೆಡ್ಡಿ ಮತ್ತು ಶ್ರೀಮತಿ ಶಾರದಾ ಮೇಡಂ ಈ. ಡಿ.ರೇಸ್ ಕಾನ್ಸೆಪ್ಟ್ ಶಾಲೆ , ಶ್ರೀಮತಿ ಅಲಿಯಾಖಾನಮ್ ಜಿಲ್ಲಾ ಆಯುಕ್ತರು ಗೈಡ್ಸ್ B.S.G. ರಾಯಚೂರು, ಅರ್.ಹೆಚ್. ಸಾಗರ್ ಅಧ್ಯಕ್ಷರು ಹಾಗೂ ಶ್ರೀ ಎನ್. ಶೇಖರ್ ಕಾಯ೯ದಶಿ೯ಗಳು, ಭಾ.ಸ್ಕೌ.ಗೈ.ಸ್ಥಳೀಯ ಸಂಸ್ಥೆ,ರಾಯಚೂರು, ಶ್ರೀ ವಿಜಯಲಕ್ಷ್ಮಿ ಜಿಲ್ಲಾ ತರಭೇತಿ ಆಯುಕ್ತರು ಗೈಡ್ಸ್ ಮತ್ತು ಶ್ರೀ ನಾಗೇಶ ಗೌಡ. ಜಿಲ್ಲಾ ತರಭೇತಿ ಆಯುಕ್ತರು ಸ್ಕೌಟ್ಸ್ ಹಾಗೂ ಶಾಲೆಯ. ಮುಖ್ಯಗುರುಗಳಾದ ಭವಾನಿ ಮೇಡಂ ಮತ್ತು ಜ್ಯೋತಿ ಮೇಡಂ ಹಾಗೂ ಶಿಕ್ಷಕ ವೃಂದ ದವರು ಕಬ್ಸ್ ಅಂಡ್ ಬುಲ್ ಬುಲ್ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕಾಯ೯ಕ್ರಮದಲ್ಲಿ ಉಪಸ್ಥಿತರಿದ್ದರು.

ದಿನಾಂಕ:02-11-2020ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ರಾಯಚೂರು ವತಿಯಿಂದ ಭಾರತೀಯ ಕುಟುಂಬ ಕಲ್ಯಾಣ ಸಂಘದಲ್ಲಿ ಕುಟುಂಬ ಕಲ್ಯಾಣ ಸೌಲಭ್ಯವನ್ನು ಪಡೆಯಲು ಬಂದಿರುವ ಮಹಿಳೆಯರಿಗೆ ಉಚಿತವಾಗಿ ಮಾಸ್ಕ್ ಮತ್ತು ಬಿಸ್ಕೇಟ್ ನೀಡಲಾಯಿತು ಹಾಗೂ ಕೋವಿಡ್-19 ಮುಂಜಾಗ್ರತಾ ಕ್ರಮಗಳ ಬಗ್ಗೆ ಸಹ ಮಾಹಿತಿಯನ್ನು ನೀಡಲಾಯಿತು.ಇದೇ ಸಂದರ್ಭದಲ್ಲಿ ಶ್ರೀಮತಿ ಆಲೀಯಾ ಖಾನಂ ಜಿಲ್ಲಾ ಆಯುಕ್ತರು ಗೈಡ್, ಶ್ರೀ ಅಮರೇಗೌಡ ಪಾಟೀಲ್ ಸಹ ಕಾರ್ಯದರ್ಶಿಗಳು, ಶ್ರೀ ಕೆ.ಹನುಮಂತಪ್ಪ, ಶ್ರೀ ವಾಗೇಶ್ ಮ್ಯಾನೇಜರ್,ಡಾ: ಪ್ರೀತಿ, ಶ್ರೀ ಎನ್.ಶೇಖರ್ ಕಾರ್ಯದರ್ಶಿಗಳು ಸ್ಥಳೀಯ ಸಂಸ್ಥೆ ರಾಯಚೂರು,ಕು.ಅಂಬಣ್ಣ ನಾಯಕ ಎಸ್.ಜಿ.ವಿ, ರೋವರ್ಸ್ ಜಯಸಿಂಹ, ಶಿವಪ್ರಕಾಶ್ ಕೋರಿ ಉಪಸ್ಥಿತರಿದ್ದರು.